Friday, August 17, 2007

ಅನಿವಾರ್ಯದ ಅರಿವು ಆಳಕ್ಕಿಳಿಯಲೇಬೇಕಾದ ಘಳಿಗೆ ಹತ್ತಿರಾಗುತ್ತಿದೆ
ನಿನ್ನ ತಳಮಳ, ನನ್ನ ಕಣ್ಣೀರು
ಮಾತಾಗದೇ ಮನಸ್ಸಿಗಿಳಿದಾಗ
ನಗಬೇಕೋ ಅಳಬೇಕೋ ಅರ್ಥವಾಗದ ನಿಟ್ಟುಸಿರು
ಇದೇ ಕೊನೆಯೋ, ಮುಂದೊಂದು ಹೊಸ ದಾರಿ ನಮ್ಮ ಜೊತೆಗೆ ಇದೆಯೋ...
ಪರ್ವಕಾಲ ಕಳೆದಾಗ ಉಳಿಯುವುದೆಷ್ಟು? ಬದುಕಿಗಾದೀತಾ?
ಇಷ್ಟೆಲ್ಲ ಇದ್ದವ ಸ್ವಲ್ಪ ಗಟ್ಟಿಗನಾಗಿದ್ದಿದ್ದರೆ ಅನ್ನುವ ಕೋಪ ಮಿಂಚುತ್ತದೆ
ಈಗ ಕರೆದರೆ ಹೋದೀಯಾ ಅನ್ನುತ್ತದೆ ಅಹಂಕಾರ!
ನೆನ್ನೆಯನ್ನು ಮರೆತು ಇವತ್ತನ್ನು ಒಪ್ಪದಿದ್ದರೆ ಪೂರಾ ಖಾಲಿಯಾಗಿಬಿಡುವ ಭಯ
ನಿನಗೊಂದು ಮನದಾಳದ ಹಾರೈಕೆ ನೀಡದಿದ್ದರೆ ಅದೆಂಥ ಪ್ರೀತಿ ಅನ್ನುವ ಮನ

ಬಾಳ ಹಾದಿಯಲಿ ಬೇರೆಯಾದರೂ ಚಂದಿರ ಬರುವನು ನಮ್ಮ ಜೊತೆ...
ನಿನ್ನ ಹಾದಿಯಲಿ ಹೂವಿರಲಿ ಗೆಳೆಯ

No comments: